Slide
Slide
Slide
previous arrow
next arrow

ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ: ಪ್ರಕರಣ‌ ದಾಖಲು

300x250 AD

ಭಟ್ಕಳ: ತೆಂಗಿನಗುಂಡಿ ಬಂದರು ಸಮೀಪವಿರುವ ಆಲದ ಮರದಲ್ಲಿ ವ್ಯಕ್ತಿಯೋರ್ವರ ಮೃತ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಅನುಮಾನಾಸ್ಪ ಸಾವು ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದಿದೆ.

ಮೃತ ವ್ಯಕ್ತಿಯನ್ನು ತೆಂಗಿನಗುಂಡಿ ಹೆಬಳೆ ನಿವಾಸಿ ಆಟೋ ಚಾಲಕ ಲಕ್ಷ್ಮಣ ನಾರಾಯಣ ನಾಯ್ಕ (40) ಎಂದು ಗುರುತಿಸಲಾಗಿದೆ. ಈತ ಬುಧವಾರ ರಾತ್ರಿ 8 ಗಂಟೆಗೆ ತನ್ನ ಆಟೋ ತೆಗೆದುಕೊಂಡು ಮನೆಯಿಂದ ಹೋಗಿದ್ದು ರಾತ್ರಿ ಮರಳಿ ಮನೆಗೆ ಬಂದಿರುವುದಿಲ್ಲ. ನಂತರ ಗುರುವಾರ ಬೆಳ್ಳಿಗ್ಗೆ ದಯಾನಂದ ವೆಂಕಟ್ರಮಣ ನಾಯ್ಕ ಎನ್ನುವವರು ಮೃತನ ಸಹೋದರ ಕೃಷ್ಣ ನಾಯ್ಕರಿಗೆ ಕರೆ ಮಾಡಿ ನಿಮ್ಮ ಸಹೋದರ ಲಕ್ಷ್ಮಣ  ತೆಂಗಿನಗುಂಡಿ ಬಂದರಿನಲ್ಲಿ ಇರುವ ಆಲದ ಮರಕ್ಕೆ ನೇಣು ಹಾಕಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಹೋಗಿ ನೋಡಿದರೆ ಲಕ್ಷ್ಮಣ ನಾಯ್ಕ ತೆಂಗಿನಗುಂಡಿ ಬಂದರಿನಲ್ಲಿ ಇರುವ ಆಲದ ಮರದ ಟೊಂಗೆಗೆ ಹಗ್ಗವನ್ನು ಕಟ್ಟಿಕೊಂಡು ತನ್ನ ಕುತ್ತಿಗೆಗೆ ನೇಣು ಹಾಕಿ ಸಾವನ್ನಪ್ಪಿದ್ದಾರೆ.ಆದರೆ ಈ ಸಾವಿನಲ್ಲಿ ಸಂಶಯವಿರುವ ಬಗ್ಗೆ ಮೃತನ ಸಹೋದರ ಕೃಷ್ಣ ನಾಯ್ಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

300x250 AD

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ  ಪಿ.ಎಸ್.ಐ  ಮಯೂರ ಪಟ್ಟಣಶೆಟ್ಟಿ ತನಿಖೆ ಕೈಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top